ರಾಯಬಾಗ: ವಕೀಲನ ಹತ್ಯೆ ಆರೋಪಿ; ವಕೀಲ ಕಿರಣ ಕೆಂಪವಾಡೆ ಬಂಧನ….
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಯುವ ವಕೀಲರೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ೬ ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸಂತೋಷ ಅಶೋಕ ಪಾಟೀಲ್ ಎಂಬ ವಕೀಲರ ಹತ್ಯೆ ನಡೆದಿದ್ದು, ಕಿಡ್ನಾಪ್ ಆಗಿದೆ ಎಂದು ತಿಂಗಳುಗಟ್ಟಲೆ, ತಾಲೂಕಿನ ತುಂಬೆಲ್ಲ ಸುದ್ದಿ ಹರದಾಡಿತ್ತು.
ಸದ್ಯ ಪ್ರಕರಣದ a3 ಆರೋಪಿ ಕಿರಣ ಕೆಂಪವಾಡೆ ಬಂಧನವಾಗಿದ್ದು, ರಾಯಬಾಗ ಪೋಲಿಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ನುಳಿದ ಆರೋಪಿಗಳಿಗಾಗಿ, ಪೊಲೀಸರು ಜಾಲ ಬೀಸಿದ್ದು ತಿಳಿದು ಬಂದಿದೆ.