SHOCKING NEWS: ಶಾಲಾ ಬಸ್ ಹರಿದು ಬಾಲಕ ಸಾವು
ಕಂಕನವಾಡಿ ಗುರ್ಲಾಪುರ ರಸ್ತೆ ಮಧ್ಯ ಈ ದುರ್ಘಟನೆ ನಡೆದಿದೆ.
ಮುತ್ತುರಾಜ ಶಂಕರ ಮುಗಳಕೋಡ ವಯಸ್ಸು ೪ ಎಂಬ ಬಾಲಕ
ಎಂದಿನಂತೆ ಸಮರ್ಥ್ ಸ್ಕೂಲ್ ನಾಗನೂರ ಶಾಲೆಯಿಂದ ಮನೆ ಕಡೆಗೆ, ಹೋಗುತ್ತಿದ್ದ ಸಂದರ್ಭದಲ್ಲಿ, ಬಾಲಕ ಶಾಲೆಯ ಬಸ್ ನಿಂದ ಇಳಿದು ತನ್ನ ಮನೆ ಕಡೆಗೆ ಹೋಗುತ್ತಿದ್ದ ಸಂದರ್ಭ,
ಮನೆ ಹತ್ತಿರ ಬರುತ್ತಿದ್ದಂತೆ ಬಾಲಕನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕಿದ್ದ, ವಾಹನದ ಚಾಲಕ ಮತ್ತು ಆಡಳಿತ ಮಂಡಳಿಯವರು
ರಸ್ತೆ ಮೇಲೆ ಮಗುವನ್ನು ಬಿಟ್ಟು ಹೋಗಿ ಎಡವಟ್ಟು ಮಾಡಿದ್ದಾರೆ.
ರಸ್ತೆ ಕ್ರಾಸ್ ಮಾಡಿ ಮನೆಗೆ ಹೋಗಬೇಕಾದರೆ ಯಮನಂತೆ ಬಂದ ಬೈಕ್ ಬಾಲಕನನ್ನು ಎಳೆದೋಯ್ದು ರಸ್ತೆ ಮೇಲೆ ಬಿಟ್ಟಿದೆ.
ಅಷ್ಟರಲ್ಲೇ ಮತ್ತೊಂದು ವಾಹನ ಬಂದು ಆ ಬಾಲಕನ ಮೇಲೆ ಹರಿದು ದೇಹ ಛಿದ್ರ ಮಾಡಿಬಿಟ್ಟಿದೆ.
ರಸ್ತೆ ಮೇಲೆ ಹೋಗುವ ವಾಹನ ಸವಾರರು ಮೃತ ದೇಹ ಕಂಡು ಮರುಗಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ, ಸಂಬಂಧಪಟ್ಟ ಆರ್ ಟಿ ಓ ಅಧಿಕಾರಿಗಳು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳ ವಿಷಯದಲ್ಲಿ ಚೆಲ್ಲಾಟ ಆಡದೆ, ಶಾಲಾ ಆಡಳಿತ ಮಂಡಳಿ ಮೇಲೆ ಕ್ರಮಮಾಡಬೇಕು ಹಾಗೂ ವಾಹನ ಮೇಲ್ವಿಚಾರಕರು ಈ ವಾಹನದ ದಾಖಲೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು, ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಏನೇ ಆಗಲಿ ಸ್ಕೂಲ್ ಮಕ್ಕಳನ್ನು ರಸ್ತೆ ದಾಟಿಸಿ ಅವರ ಮನೆಗೆ ಬಿಟ್ಟಿದ್ರೆ ಆ ಬಾಲಕ ಸಾಯುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು
ಇನ್ನೂ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.