ನಿಡಸೋಶಿ ಗೇಟ್: ಲಿಕ್ಕರ್ ಬಿಲ್ ಕೇಳಿದರೆ ಸಾಹುಕಾರ್ ಬಂದ ಕೊಡ್ತಾರೆ, ಗ್ರಾಹಕರ ಗೋಳು ಕೇಳುವವರ್ಯಾರು, ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ ಪೊಲಿಸ್ ಇಲಾಖೆ.
ಅಯ್ಯೊ ದೇವರೆ ಬಿಲ್ ಕೇಳಬಾರ್ದಾ? ಬಿಲ್ ಕೊಡಲ್ವಾ!!! ಏಕೆ ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗೇಟ ಸಮೀಪವಿರುವ ವಿಜಯಲಕ್ಷ್ಮಿ ಬಾರ್ ಒಂದರಲ್ಲಿ ಬಿಲ್ಲೆ ಕೊಡಲ್ಲ ಬಿಲ್ ಕೇಳಿದ್ರೆ ಗ್ರಾಹಕರಿಗೆ ಗೂಸಾ ಪೆಟ್ಟು ಬಿಳುವದು ಗ್ಯಾರಂಟಿ,ಅಯ್ಯೋ ಪಾಪ ಗ್ರಾಹಕರೇ ದೇವರು ಎಂದು ಒಂದು ಕಡೆ ಬೊರ್ಡ ಇದ್ರೆ ಮತ್ತೊಂದು ಕಡೆ ಸರ್ವಾಧಿಕಾರ.
ಸರ್ಕಾರ ನಡೆಯುತ್ತಿರುವದೇ ಸರಾಯಿ ಮೇಲೆ ಎಂದು ಮರೆತ ಸರ್ಕಾರಕ್ಕೆ ಛಿಮಾರಿ ಹಾಕಬೇಕಿದೆ ಹೌದು ಬಿಲ್ ಬೇಕು ಬಿಲ್ ಕೊಡಲ್ಲಾ ಕೊಡಲ್ಲ ಎಂದ ಬಾರ್ ಮಾಲೀಕ ವೆಲ್ ಎಜ್ಯುಕೆಟೆಡ್ ವ್ಯಕ್ತಿಯೊರ್ವ ಬಾರ್ ಗೆ ಹೋಗಿ ಸರಾಯಿ ಮಾರಾಟ ಮಾಡಿಕೊಂಡ ನಂತರ ಬಿಲ್ ಕೇಳಿದ್ದಕ್ಕೆ ಬಿಲ್ ಕೊಡದೆ ಕಾನೂನಿನ ನಿಯಮ ಉಲ್ಲಂಘನೆ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಇನ್ನೂ ಆಡಿಟ್ ರಿಪೊರ್ಟ ಮಾಡುವವರಿಗೆ ಪಂಗನಾಮ ಹಾಕುವದು ಇದರಲ್ಲಿ ಸಂಶಯವಿಲ್ಲ ಎಂದು ಕಾಣ ಬರುತ್ತಿದೆ.ತಮ್ಮ ಖಜಾನೆ ತುಂಬಿಸಿಕೊಳ್ಳಲು ದುಭಾರಿ ಬೆಲೆಗೆ ಸರಾಯಿ ಮಾರಾಟ ಮಾಡಿಕೊಂಡು ಬಿಲ್ ಕೊಡದೆ ವ್ಯಕ್ತಿಯೊರ್ವನಿಗೆ ಧಮ್ಕಿ ಹಾಕಿದ ಘಟನೆ ನಿಡಸೋಶಿ ಗೇಟನ ವಿಜಯಲಕ್ಷ್ಮಿ ಬಾರನಲ್ಲಿ ನಡೆದಿದೆ ಆದರೆ ಈ ಬಗ್ಗೆ ಕೆಳುವವರು ಯಾರು ಇಲ್ಲವೆ ಅಧಿಕಾರಿಗಳಂತೂ ಹಪ್ತಾಗೆ ಬೆನ್ನು ಹತ್ತಿ ಗ್ರಾಹಕರ ಹಣ ಪೀಕುವಲ್ಲಿ ಮುಂದಾಗಿದ್ದಾರೆ,ಎಂದು ಸರಾಯಿ ಪ್ರಿಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನೂ ಬಿಲ್ ಕೊಡದೆ ಇಷ್ಟು ವರ್ಷಗಳಲ್ಲಿ ಎಷ್ಟು ಹಣ ಮಾಡಿರಬಹುದು ಎಂದು ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ.ಯಾವ ಇಲಾಖೆಗೆ ಹೋಗಲಿ ಎಲ್ಲರಿಗೂ ಒಂದು ಸರ್ಕಾರ ಮಿತಿ ಇಟ್ಟಿದೆ. ಆದರೆ ಈ ಬಾರನವರು ಮಾಡಿದ್ದೆ ಆಟ ಒಡಿದ್ದೆ ಕುದುರೆ ಎಂಬಂತೆ ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ.
ಹೀಗಾದರೆ ಬಾರ್ ಲೈಸನ್ಸ್ ರದ್ದು ಮಾಡಬಹುದು ಹಾಗೇಯೆ ಸ್ವಲ್ಪ ಶೌಚಾಲಯ ಕುಡಿಯುವ ನೀರಿನ ಬಗ್ಗೆ ಮಾಹಿತಿ ಹೇಳಬೇಕಾದರೆ ಅಯ್ಯೋ ನೀರಾ ಇವು, ಹೇಗೆ ಕುಡಿತಿರಪ್ಪಾ ಹೇಗಾದ್ರೂ ಇಂತವರಿಗೆ ಪರ್ಮಿಶನ್ ಕೊಟ್ರು ಅನ್ಯಾಯ ಅನ್ಯಾಯ ಅನ್ಯಾಯ ಕುಡುಕರಿಗೆ ಅನ್ಯಾಯ ಮನೇಲಿ ನೀರಿನಲ್ಲಿ ಒಂದು ಕೂದಲು ಬಿದ್ರೆ ಜಗಳವಾಡ್ತಿರಿ ಇಲ್ಲಿ ನೀರಿನ ಟ್ಯಾಂಕ್ ಒಮ್ಮೆ ಇಣುಕಿ ನೋಡಿ ನಿವೆಂದು ಈ ಬಾರಗೆ ಹೋಗಲೇಬಾರದು ಹಾಗೇ ಅವ್ಯವಸ್ಥೆ ನಿಮ್ಮ ಮುಂದೆ ಇದೆ.
ಎಚ್ಚರ ಗ್ರಾಹಕರೆ ನೀವು ಜಾಣರಾಗಿ ದುಡ್ಡು ಕೊಟ್ಟು ರೋಗ ಹಚ್ಚಿಕೊಂಡು ಬರುವದಾರೆ ಹಾಗೆ ಬಿಲ್ ಕೆಳೊದಿಲ್ಲ, ಹಾಗಿದ್ದರೆ ಧಾರಾಳವಾಗಿ ಸರಾಯಿ ಕುಡಿರಿ.ಯಾರ್ದೊ ದುಡ್ಡು ಯಲ್ಲಮ್ಮನ ಜಾತ್ರೆ ವಿಜಯಲಕ್ಷ್ಮಿ ಬಾರ ಮೇಲೆ ಅಧಿಕಾರಿಗಳು ಯಾವರೀತಿ ಕ್ರಮ ಕೈಗೊಂಡು ಅನ್ಯಾಯವಾಗುತ್ತಿರುವ.
ಗ್ರಾಹಕರಿಗೆ ನ್ಯಾಯ ಒದಗಿಸುವಲ್ಲಿ ಮುಂದಾಗ್ತಾರಾ ಕಾದು ನೊಡಬೇಕಿದೆ.ಇನ್ನೂ ಪೊನ ಇನ್ ಕಾರ್ಯಕ್ರಮ ಕ್ಕೂ ದೂರು ನೀಡಲು ಮುಂದಾಗಿದ್ದಾರೆ.
ದೂರು ನೀಡಿದವರ ವಿರುದ್ದ ಜಗಳ ಆಗುವದು ಗ್ಯಾರಂಟಿ ಆದರೆ ಇದನ್ನೆಲ್ಲ ಪೊಲಿಸರು ಹೇಗೆ ಹ್ಯಾಂಡಲ್ ಮಾಡಿ ಸರ್ವಾಧಿಕಾರ ತೊರುವ ಬಾರ್ ಮಾಲಿಕನಿಗೆ ಪೋಲಿಸರು ಯಾವ ರೀತಿ ಶಾಕ್ ಕೊಡುತ್ತಾರೆಂದು ಕಾದು ನೊಡಬೇಕಿದೆ. ವರದಿ ಚಂದ್ರು ತಳವಾರ