ಕಟಿಂಗ್ ಶಾಪ್ ಗೆ ಬೆಂಕಿ ಹಚ್ಚಿ ಪರಾರಿಯಾದ ಭೂಪ…!
ಬೆಳಗಾವಿ ಜಿಲ್ಲೆ, ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದ ಘಟನೆ.
ನಿಪನಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರವಿರುವ ಕಟಿಂಗ್ ಶಾಪ್ ಗೆ ಮುಂಜಾನೆ 8:00 ಗಂಟೆ ಸಮಯದಲ್ಲಿ, ಸಾಗರ್ ಪಡತರಿ ಎಂಬಾತನಿಂದ ಈ ಕೃತ್ಯ ನಡೆದಿದೆ.
ಅಣ್ಣನ ಮಗನ ಮೇಲಿನ ದ್ವೇಷದ ಹಿನ್ನೆಲೆ ಸಾಗರ ಪಡತರಿ ಬೆಂಕಿ ಹಚ್ಚಿದ್ದಾನೆ. ಎಂದು ನಿಂಗಪ್ಪ ನಾವಿ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಬೆಂಕಿ ಅನಾಹುತಕ್ಕೆ ಕಟಿಂಗ್ ಶಾಪ್ ಸುಟ್ಟು ಕರಕಲಾಗಿದೆ.
ಬೆಂಕಿ ಅವಘಡದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಆಗಿದೆ. ಸರಕಾರ ನಮಗೆ ಪರಿಹಾರ ಕೊಡಬೇಕು, ಬೆಂಕಿ ಹಚ್ಚಿ ಪರಾರಿ ಆದ ಸಾಗರನ ಮೇಲೆ ಕೇಸ್ ದಾಖಲಿಸಿಕೊಂಡು, ಆತನ ಮೇಲೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು, ಕೆಂಪಣ್ಣ ನಾವಿ(ಕಟಿಂಗ ಶಾಪ್ ಮಾಲೀಕ) ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮುಕಾಂತರ ಮನವಿ ಮಾಡಿದ್ದಾರೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ, ಪೋಲಿಸ್ ಮೂಲಗಳಿಂದ ತಿಳಿದು ಬರಬೇಕಿದೆ.
ಜರ್ನಲಿಸ್ಟ್: ಚಂದ್ರು ತಳವಾರ