ಮೂಡಲಗಿ: ಚಾಲಕನ ಮೇಲೆ ನಿಗಾ ವಹಿಸದ ಶಾಲಾ ಆಡಳಿತ ಮಂಡಳಿ ವಿರುದ್ಧ ಸಿಡದೆದ್ದ ಬಾಲಕ ಮುತ್ತುರಾಜನ ಕುಟುಂಬಸ್ಥರು…!
ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ಹೊರವಲಯದಲ್ಲಿ ಬರುವ ಸಮರ್ಥ ಸ್ಕೂಲ್ ನ ವಿದ್ಯಾರ್ಥಿ ಮುತ್ತುರಾಜ ವಯಸ್ಸು ೪ ಇತ್ತೀಚಿಗಷ್ಟೆ, ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿ ಮೆಲೆ ಬೀಕರ ರಸ್ತೆ ಅಪಘಾತ ದಲ್ಲಿ ಸಾವನ್ನಪ್ಪಿರುವುದರಿಂದ ಮುತ್ತುರಾಜನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದಂತಾಗಿದೆ.
ಇಗಾಗಲೆ ರಸ್ತೆ ಮೇಲೆ ಅಪಘಾತ ನಡೆದು ಶಾಲಾ ಬಾಲಕ ಮುತ್ತುರಾಜ ಸಾವನ್ನಪ್ಪಿರುವ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ, ಶಾಲಾ ಆಡಳಿತ ಮಂಡಳಿ ವಿರುದ್ದ, ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಆಡಳಿತ ಮಂಡಳಿ ಹಾಗು ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಬೇಜವಾಬ್ದಾರಿತನವೆ, ಈ ಅಪಘಾತಕ್ಕೆ ಮೂಲ ಕಾರಣ, ಅಧಿಕಾರಿಗಳು ಮುಂಚೇನೆ, ಸಮರ್ಥ ಶಾಲೆಗೆ ಭೇಟಿ ನೀಡಿ, ಕ್ರಮ ಕೈಗೊಂಡಿದ್ದರೆ, ನಮ್ಮ ಮಗನಿಗೆ ಈ ಪರಸ್ಥಿತಿ ಬರುತ್ತಿರಲಿಲ್ಲ. ಎಂದು ಬಿಇಓ ಮನ್ನಿಕೆರಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
(ಬೈಟ್)1 ಮೃತ ಬಾಲಕನ ಮಾವ
ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಡು ಹೋಗುವಾಗ ಹಲವಾರು ನಿಯಮಗಳಿದ್ದರೂ, ಅವುಗಳನ್ನು ಉಲ್ಲಂಘಿಸಲಾಗುತ್ತಿಲ್ಲ. ಎಂದು ಮೃತ ಬಾಲಕನ ಅಕ್ಕಾ ಮಾಧ್ಯಮದ ಮುಂದೆ ಅಳಲನ್ನು ತೋಡಿಕೊಂಡಿದ್ದಾಳೆ.
(ಬೈಟ್ 2) ಮೃತ ಬಾಲಕನ ಅಕ್ಕಾ
ಮಕ್ಕಳನ್ನು ಕರೆದೊಯ್ಯುವ ವಾಹನಗಳು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬ ಸೂಚನೆಗಳಿದ್ದರೂ, ಆಡಳಿತ ಮಂಡಳಿಯವರು ಆರ್ ಟಿ ಓ ಪರವಾನಿಗೆ ಪಡೆಯದೆ, ಮನಸೋ ಇಚ್ಛೆ, ಲಗಜೇರಿ ಅಂತಹ ವಾಹನಗಳನ್ನು ಉಪಯೋಗಿಸಿ, ಚಾಲಕರ ಕುರಿತು ಸರಿಯಾಗಿ ಮಾಹಿತಿ ಪಡೆಯದೆ, ಮಕ್ಕಳನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸದೆ ಇರುವುದು ಈ ಅಪಘಾತಕ್ಕೆ ಕಾರಣವಾಗುತ್ತದೆ.
ಇನ್ನೂ ಮುತ್ತುರಾಜನ ತಂದೆ ಶಂಕರ ಮಲ್ಲಪ್ಪ ಮುಗಳಕೋಡ ಮಾತನಾಡಿ, ನನ್ನ ಮಗುವಿನ ಸಾವಿಗೆ ಕಾರಣರಾದವರು, ಯಾರೇ ಆಗಿರಲಿ, ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಯವರು, ಅವರುಗಳ ವಿರುದ್ದ ಕಠಿಣ ಕಾನೂನಿನ ಕ್ರಮ ಜರುಗಿಸಿ, ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು, ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಹೇಳಿಕೆ, ಏನು ?
ಮೃತ ವಿದ್ಯಾರ್ಥಿ ಮುತ್ತುರಾಜನ ದುರ್ಮರಣಕ್ಕೆ, ಶಾಲಾ ಆಡಳಿತ ಮಂಡಳಿ ಅವರೇ ಮುಖ್ಯ ಕಾರಣ. ಖಾಸಗಿ ಶಾಲೆ ನಿಯಂತ್ರಿಸುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಒಂದು ವೇಳೆ ನೋಡಿಕೊಳ್ಳುದಿದ್ದರೆ ನಿಮ್ಮ ಮಕ್ಕಳಿಗು ಇದೆ ಘತಿ ಆಗುವುದೆಂದು ಗುಡುಗಿದರು.
ಶಾಲಾ ವಾಹನಗಳ ನೋಂದಣಿ ಪ್ರಮಾಣ ಪತ್ರದ ಜತೆ ಫಿಟ್ನೆಸ್ ಸರ್ಟಿಫಿಕೆಟ್ ಕೂಡಾ ಕಡ್ಡಾಯ.
15 ವರ್ಷ ಅವಧಿ ಮಿರಿದ ವಾಹನಗಳನ್ನು ಬಳಸಬಾರದು, ವಿಮೆ ಮಾಡಿಸಿರಬೇಕು, ಚಾಲಕರ ಹಿನ್ನೆಲೆ ಅರಿತಿರಬೇಕು ಎಂಬ ಸೂಚನೆಯೂ ಇದೆ. ಈ ಕುರಿತು ಆರ್ಟಿಓ ಅಧಿಕಾರಿಗಳು ಲಗಜೇರಿ ಮಾಲಕನ ವಿರುದ್ಧ, ಮತ್ತು ಚಾಲಕನ ವಿರುದ್ಧ,ಯಾವ ಕ್ರಮ ಕೈಗೊಳ್ಳುತ್ತಾರೆ ಕಾಯ್ದು ನೋಡಬೇಕು.
ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಭಾಗ ೨ ರಲ್ಲಿ ನಿರೀಕ್ಷಿಸಿ!!
ಜರ್ನಲಿಸ್ಟ್: ಚಂದ್ರು ತಳವಾರ