ಪುಕ್ಸಟ್ಟೆ ಸಿಗರೆಟ್ ಸೇದುವ ಉಪಾಧ್ಯಕ್ಷನನ್ನು ಬಂದಿಸುವಂತೆ ಗೋಕಾಕದಲ್ಲಿ ರಸ್ತೆ ತಡೆದು ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ
ಗೋಕಾಕ: ಮೂಡಲಗಿ ತಾಲೂಕಿನ ಯಾದವಾಡದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಡಾ: ಅಂಬೇಡ್ಕರ ಭಾವ ಚಿತ್ರಕ್ಕೆ ಸೆಗಣಿ ಹಚ್ಚಿದ್ದನ್ನು ಖಂಡಿಸಿ ಗೋಕಾಕ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘದಟನೆ ಹಾಗೂ ದಲಿತ ಪರ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಿ ರಸ್ತೆ ತಡೆದು ನೂರಾರು ದಲಿತರು ಪ್ರತಿಭಟನೆ ಮಾಡಿದರು.
ನಂತರ ದಿಕ್ಕಾರ ಕೂಗುತ್ತಾ ಪಾದಯಾತ್ರೆ ಮಾಡುತ್ತಾ ಪೋಲಿಸರ ನಡೆಯ ವಿರುದ್ದ ದಿಕ್ಕಾರ ಕೂಗುತ್ತಾ ತಹಸಿಲ್ದಾರ ಕಚೇರಿ ಮುಂದೆ ದರಣಿ ಮಾಡಿದರು.
ಪ್ರತಿಭಟನೆಯಲ್ಲಿ ಬಾಗಿಯಾದ ದಲಿತ ಮಹಿಳಾ ಅದ್ಯಕ್ಷ ಕಮಲಾ ಕರೆಮ್ಮನವರ ಇವರು ಮಾತನಾಡಿ ಹಲ್ಲೆ ಮಾಡಿದವನಿಗೆ ಉಪಾದಕ್ಷ ಹುದ್ದೆ ಬಂದಿದ್ದು ಡಾ: ಬಾಬಾಸಾಹೇಬ ಅಂಬೇಡ್ಕರ ಇವರು ನೀಡಿದ ಸಂವಿಧಾನದಿಂದ ಹೀಗಿರುವಾಗ ದುಡಿಯಲು ಬಂದಂತಹ ದಲಿತ ಯುವಕನ ಎಳಿಗೆ ಸಹಿಸಲಾಗದ ಕಲ್ಮೇಶ ಗಾಣಿಗೇರ ಇತ ಹಲ್ಲೆ ಮಾಡಿದ್ದು ಕೇವಲ ಸಿಗರೇಟು ನೇಪ ಮಾತ್ರ ಇದೆ, ಅದಕ್ಕಾಗಿ ಪೊಲೀಸ್ ಇಲಾಖೆಯವರು ಬಹಳಷ್ಟು ದೊಡ್ಡ ಅಪರಾದಿಗಳನ್ನು ಬಂದಿಸಿದ್ದಿರಿ, ಆದರೆ ಕಲ್ಮೇಶ ಗಾಣಿಗೇರನನ್ನು ಬಂದಿಸುವಲ್ಲಿ ವಿಫಲ ಆಗುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಈಶ್ವರ ಗುಡಜ ಇವರು ಆರೋಪಿಗಳು ಇರುವ ಸ್ಥಳ ಗೊತ್ತಿದ್ದರೂ ಸಹ ಪೋಲಿಸರು ಅವರನ್ನು ಬಂದಿಸುವಲ್ಲಿ ಹಿಂದೇಟು ಹಾಕುತ್ತಿದ್ದಿರಿ. ಪೊಲಿಸ್ ಇಲಾಖೆಗೆ ಇಷ್ಟೊಂದು ಚಳ್ಳೆ ಹಣ್ಣು ತಿನ್ನಿಸುತಿದ್ದಾನೆಂದರೆ ಅವನು ಎಷ್ಟು ಕ್ರಿಮಿನಲ್ ಇದ್ದಿರಬಹುದು,ಅಂತವನನ್ನು ತಾವು ಯಾಕೆ ಬಂದಿಸುತ್ತಿಲ್ಲ ಎಂದು ಪ್ರಶ್ನಿಸಿ ಪೋಲಿಸರ ವಿರುದ್ದ ಹರಿಹಾಯ್ದರು.
ಅದಕ್ಕಾಗಿ ಪೋಲಿಸ ಇಲಾಖೆಯವರು ತಕ್ಷಣ ಹಲ್ಲೆ ಮಾಡಿದ ಕಲ್ಮೇಶ ಗಾಣಿಗೇರ ಮತ್ತು ಆತನ ಸಹಚರರನ್ನು ಬಂದಿಸಬೇಕೆಂದು ಒತ್ತಾಯಿಸಿ. ಇಲ್ಲದಿದ್ದರೆ ರಾಜ್ಯಾದಂತ ಪೋಲಿಸ ಠಾಣೆಗಳ ಎದುರು ಪ್ರತಿಬಟನೆ ಮಾಡುತ್ತೇವೆಂದು ತಹಸಿಲ್ದಾರ ಮುಖಾಂತರ ಗೃಹ ಸಚಿವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ ದಲಿತ ಮುಖಂಡರಾದ ಸುರೇಶ ಕುಮರೇಶಿ,ವಿಶಾಲ ಮೇಸ್ತ್ರೀ. ಹನನಂತ ಅಮ್ಮನಗಿ.ರಮೇಶ ಮೇಸ್ತ್ರಿ, ಅರ್ಜುನ ಗಂಡವ್ವಗೋಳ,ರಮೇಶ ಮಾಸನ್ನವರ.ಸಂತು ಪೂಜೇರಿ ಗೋವಿಂದ ಕಳ್ಳಿಮನಿ. ಶೇಟ್ಟೇಪ್ಪ. ಮೇಸ್ತ್ರೀ. ಬಸು ಮೇಸ್ತ್ರೀ. ರಮೇಶ ಮಾದರ. ಏಬನೇಜರ ಕರಬ್ಬನವರ.
ರಪೀಕ ಬೋಕರೇ. ಲಗಮಪಗೋಳ .ಮುದಲಿಂಗ ಗೊರಬಾಳ, ಉದಯ ಮಾಡನಗೆರಿ.ನಾಗಪ್ಪ ಹರಿಜನ
ಸುನಿತಾ ಕೋಣ್ಣೂರ. ಸಂಗೀತಾ ಕಾಂಬಳೆ .ಲಕ್ಷ್ಮೀ ಪಾಟಿಲ.ಜಯಶ್ರೀ ಸೂರ್ಯವಂಶಿ.ಲಕ್ಷ್ಮಿ ಹೊಸಮನಿ.ಯಶೋಧ ಬಡಿಗೇರ್.ಸುನಿತಾ ಕೊಳವಿ .ಶಬ್ಬೀರ್ ಮುಜಾವರ್
ಸೇರಿದಂತೆ ಪ್ರತಿಭಟನೆಯಲ್ಲಿ ನೂರಾರು ದಲಿತ ಮುಖಂಡರು ಬಾಗಿಯಾಗಿದ್ದರು.