ಶಿವಾಪೂರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ
ಶಿವಾಪೂರ(ಹ): 2023-24 ನೇ ಸಾಲಿನ ಗಾಂಧಿ ಗ್ರಾಂ ಪುರಸ್ಕಾರ ಕ್ಕೆ ಆಯ್ಕೆಯಾದ ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮ ಪಂಚಾಯಿತಿಗೆ ಡಿಸೆಂಬರ್ 01 ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ ಹಾಲನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ಸಮ್ಮುಖದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಶಿವಾಪೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಲ್ ಬಬಲಿ ಹಾಗೂ ಪಂಚಾಯಿತಿ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೋಳ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ,ಸ್ಮರಣಿಕೆ ಹಾಗೂ 5 ಲಕ್ಷ ರೂ. ಪ್ರೋತ್ಸಾಹ ದನವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಎಸ್.ಎಲ್ ಬಬಲಿ ಸೂಪರ್ ನ್ಯೂಸ್ ಜೊತೆ ಮಾತನಾಡಿ ಗಾಂಧಿ ಗ್ರಾಂ ಪ್ರಶಸ್ತಿ ಸಿಗಲು ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಶಿವಾಪೂರ ಪಂಚಾಯಿತಿಗೆ ವಿಶೇಷ ಒತ್ತು ಕೊಟ್ಟು ಮೂಲಭೂತ ಸೌಕರ್ಯ ಗಳನ್ನು ಒದಗಿಸಿ ಕೊಟ್ಟಿದ್ದಾರೆ ಹಾಗೂ ಗ್ರಾಮದ ಮುಖಂಡರಾದ ದಿ.ಶಿವನಗೌಡ ಶಂಕರಗೌಡ ಪಾಟೀಲ ,ಎಸ್.ವಾಯ ಜುಂಜರವಾಡ,ಕೆ. ಬಿ ಮುಧೋಳ,ಐ.ಬಿ ಬೆಳಗಲಿ,ಎಸ್.ಡಿ ಪಾಟೀಲ,ಕೆ.ಜಿ ಮುಧೋಳ ಸೇರಿದಂತೆ ಗ್ರಾಮದ ಎಲ್ಲ ಮುಖಂಡರು,ಗ್ರಾಮಸ್ಥರು ,ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಪಂಚಾಯತನ ಉಪಾಧ್ಯಕ್ಷರು ಎಂ.ಎಂ ಜುಂಜರವಾಡ ಸೇರಿದಂತೆ ಎಲ್ಲ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದಾರೆ ,ಪ್ರಶಸ್ತಿ ಸಿಕ್ಕಿದ್ದರಿಂದ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ತಿಳಿಸಿದರು.
ವರದಿ: ಆರ್ ಜಿ ಬಿ.ಪಾಟೀಲ


